Sunday, October 13, 2024
Sunday, October 13, 2024

ಸೂಕ್ಷ್ಮತೆ ಸೆರೆಹಿಡಿದ ಶ್ರೇಷ್ಠ ಕವಿ ಷೇಕ್ಸ್‌ಪಿಯರ್‌: ಎಸ್. ರಘುನಂದನ

ಸೂಕ್ಷ್ಮತೆ ಸೆರೆಹಿಡಿದ ಶ್ರೇಷ್ಠ ಕವಿ ಷೇಕ್ಸ್‌ಪಿಯರ್‌: ಎಸ್. ರಘುನಂದನ

Date:

ಮಣಿಪಾಲ: ಜೀವನ ಮತ್ತು ವೈವಿಧ್ಯಮಯ ಪಾತ್ರಗಳಲ್ಲಿ ಅಡಕವಾಗಿರುವ ಸೂಕ್ಷ್ಮತೆಯನ್ನು ಸೆರೆಹಿಡಿದಿರುವುದೇ ಷೇಕ್ಸ್‌ಪಿಯರ್‌ನ ಎಲ್ಲ ಕೃತಿಗಳ ಶ್ರೇಷ್ಠತೆ ಎಂದು ಖ್ಯಾತ ಬರಹಗಾರ ಮತ್ತು ರಂಗ ನಿರ್ದೇಶಕರಾದ ಎಸ್ ರಘುನಂದನ ನುಡಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ ವೆಬಿನಾರ್ ನಲ್ಲಿ ಷೇಕ್ಸ್‌ಪಿಯರ್‌ನ ‘ರೋಮಿಯೋ, ಜೂಲಿಯೆಟ್ ಮ್ಯಾಕ್‌ಬೆತ್‌’ನ ಕುರಿತು ಮಾತನಾಡಿದರು.

ಶೇಕ್ಸ್‌ಪಿಯರ್ ಒರಟು – ಕೋಮಲ, ಕ್ರೂರ – ಸೌಮ್ಯ, ಲೋಲುಪತೆ – ಸಂತತ್ವ, ದೀನ – ಭವ್ಯ ದಂತಹ ನೂರಾರು ವ್ಯತಿರಿಕ್ತ ಪಾತ್ರಗಳನ್ನು ರಚಿಸಿ, ಅವುಗಳನ್ನು ಒಟ್ಟಿಗೆ ಬೆಸೆದು ಜೀವನದ ‘ವಾಸ್ತವ’ವನ್ನು ಸೆರೆಹಿಡಿಡಿದ್ದಾನೆ. ರೋಮಿಯೋ ಮತ್ತು ಜೂಲಿಯೆಟ್’ ಮತ್ತು ‘ಮ್ಯಾಕ್‌ಬೆತ್‌’ನ ನಾಟಕಗಳ ನಡುವೆ ಅಂತಹ ವ್ಯತಿರಿಕ್ತತೆಯನ್ನು ನಾವು ನೋಡಬಹುದು.

ರೋಮಿಯೋ ಮತ್ತು ಜೂಲಿಯೆಟ್‌ರನ್ನು ಪುರಾತನ ಪ್ರೇಮಿಗಳು ಮತ್ತು ಅಮರ ಪಾತ್ರಗಳು ಎಂದು ಬಣ್ಣಿಸಿದ ರಘುನಂದನ ಈ ಮೂಲ ಪಾತ್ರಗಳು ದೇಶಗಳು ಮತ್ತು ಭಾಷೆಗಳ ಗಡಿಯನ್ನು ಮೀರಿ, ನೂರಾರು ನಾಟಕಗಳು ಮತ್ತು ಚಲನಚಿತ್ರಗಳಲ್ಲಿ ರೂಪು ತಳೆದಿವೆ. ಮ್ಯಾಕ್‌ಬೆತ್ ನಮ್ಮೊಳಗಿನ ‘ದುಷ್ಟತ್ವದ’ ಜೊತೆಗೆ ವ್ಯವಹರಿಸುತ್ತದೆ ಎಂದು ಹೇಳಿದರು.

ಜಿಸಿಪಿಎಎಸ್ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಎಲ್ಲಾ ಟೀಕೆಗಳ ಹೊರತಾಗಿಯೂ ಶೇಕ್ಸ್‌ಪಿಯರ್ ಕಾಲಗಳನ್ನೂ ಮೀರಿ ಸಮಕಾಲೀನ ಬರಹಗಾರನಾಗಿ ಉಳಿದಿದ್ದಾನೆ ಎಂದರು.

ಪ್ರೊ. ಮನು ಚಕ್ರವರ್ತಿ, ಪ್ರೊ. ಫಣಿರಾಜ್, ಭ್ರಮರಿ ಶಿವಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಹಿಳಾ ಪೌರ ಕಾರ್ಮಿಕರ ಪಾದಪೂಜೆ

ತುಮಕೂರು, ಅ.12: ತುಮಕೂರಿನ ಚಿಕ್ಕನಾಯಕನಹಳ್ಳಿ ಪಟ್ಟಣದ ಶಕ್ತಿ ಮಾತೆ ಶ್ರೀ ಮಹಾಲಕ್ಷ್ಮೀ...

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಗೆ ನೋಂದಣಿ ಆರಂಭ

ನವದೆಹಲಿ, ಅ.12: ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಗಾಗಿ ಶನಿವಾರ ಸಂಜೆ ಆನ್‌ಲೈನ್...

ಮಣಿಪಾಲ ಜ್ಞಾನಸುಧಾ: ಶಾರದಾ ಪೂಜೆ

ಮಣಿಪಾಲ, ಅ.12: ಅಕ್ಟೋಬರ್‌ 12ರಂದು ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು ವಿದ್ಯಾನಗರದಲ್ಲಿ...

ಕೋಟ ಅಮೃತೇಶ್ವರಿ ದೇಗುಲದಲ್ಲಿ ವೈಭವದ ಶರನ್ನವರಾತ್ರಿ ಸಂಪನ್ನ

ಕೋಟ, ಅ.12: ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ...
error: Content is protected !!