Home ಸುದ್ಧಿಗಳು ರಾಜ್ಯ ಪುತ್ತಿಗೆ ಶ್ರೀಪಾದರ ಚಾತುರ್ಮಾಸ್ಯ ಪೂರ್ವಭಾವಿ ಸಭೆ

ಪುತ್ತಿಗೆ ಶ್ರೀಪಾದರ ಚಾತುರ್ಮಾಸ್ಯ ಪೂರ್ವಭಾವಿ ಸಭೆ

420
0

ಬೆಂಗಳೂರು, ಮೇ 28: ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯ ಶ್ರೀ ಶ್ರೀ ಸುಶ್ರೀ೦ದ್ರ ತೀರ್ಥ ಶ್ರೀಪಾದರ ಜೊತೆಗೆ ಭಕ್ತಜನರ ಅಪೇಕ್ಷೆ ಮೇರೆಗೆ ಬೆಂಗಳೂರು ನಗರದ ಗೋವರ್ಧನ ಕ್ಷೇತ್ರ ಶ್ರೀ ಪುತ್ತಿಗೆ ಮಠದಲ್ಲಿ ಚಾತುರ್ಮಾಸ್ಯವ್ರತವನ್ನು ಈ ಬಾರಿ ನಡೆಸಲಿದ್ದಾರೆ. ತತ್ಪ್ರಯುಕ್ತ ಬೆಂಗಳೂರಿನ ಗೋವರ್ಧನ ಕ್ಷೇತ್ರದಲ್ಲಿ ಮೊದಲ ಸಿದ್ದತಾ ಸಭೆಯನ್ನು ನಡೆಸಲಾಯಿತು.

ಈ ಸಭೆಯಲ್ಲಿ ಪ್ರೊಫ್, ರಾಧಾಕೃಷ್ಣರಾವ್ , ಚಂದ್ರಶೇಖರ್ ಹೆಬ್ಬಾರ್, ಗಿರಿಧರ್ ಬಜ್ಪೆ, ಜಯಂತ್ ರಾವ್, ಹರೀಶ್, ರಾಘವೇಂದ್ರ ರಾವ್, ಮಾಲಿನಿ, ಪುಷ್ಪಕ್, ಅಗ್ನಿಹೋತ್ರಿ, ಶಶಿಧರ್, ವಿನಯ್, ಟಿ.ಎಂ.ಓ ಸದಸ್ಯರು ಶ್ರೀಪತಿ ಉಪಾಧ್ಯಾಯ, ಸಂತೋಷ್ ಕೆಪಿ, ಜನಾರ್ದನ ತಂತ್ರಿ ಮುಂತಾದ ಗಣ್ಯರು ಉಪಸ್ಥಿತರಿದ್ದು ಸಲಹೆಯನ್ನು ನೀಡಿದರು. ಈ ಬಾರಿಯ ಚಾತುರ್ಮಾಸ್ಯ ಶ್ರೀಪಾದರ 50 ನೇ ಪೀಠಾರೋಹಣ ವರ್ಷವಾಗಿದ್ದು ಈ ವಿಶೇಷ ಸಂದರ್ಭದಲ್ಲಿ ಶ್ರೀಪಾದರು ಕೈಗೆತ್ತಿಕೊಂಡಿರುವ ಬೃಹತ್ ಲೋಕಕಲ್ಯಾಣ ಯೋಜನೆಯಾದ ಕೋಟಿ ಗೀತಾಲೇಖನ ಯಜ್ಞವನ್ನು ವ್ಯಾಪಕವಾಗಿ ನೊಂದಾಯಿಸಲು ತೀರ್ಮಾನಿಸಲಾಯಿತು. ಶ್ರೀ ಮಠದ ವ್ಯವಸ್ಥಾಪಕ ಕುಂಜಾರ್ ಸ್ವಾಗತಿಸಿದರು. ದಿವಾನರಾದ ನಾಗರಾಜಾಚಾರ್ಯ ಪ್ರಸ್ತಾವಿಸಿದರು. ಮುಖ್ಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.