Home ಸುದ್ಧಿಗಳು ಕ್ರೈಂ ಹಲ್ಲೆ ನಡೆಸಿದ ಆರೋಪಿಗೆ ಶಿಕ್ಷೆ

ಹಲ್ಲೆ ನಡೆಸಿದ ಆರೋಪಿಗೆ ಶಿಕ್ಷೆ

571
0

ಉಡುಪಿ: ಉಡುಪಿ ತಾಲೂಕು ಬೆಳ್ಳಂಪಳ್ಳಿ ಗ್ರಾಮದ ದೊಡ್ಡನಗುಡ್ಡೆ ನಿವಾಸಿ ಮಹೇಶ್ (28) ಎಂಬ ಆರೋಪಿಯು ಪುಷ್ಪಾವತಿಯವರಿಗೆ ಸೇರಿದ ಅದೇ ಗ್ರಾಮದ ಸರ್ವೇ ನಂ. 72-4 ನೇ ನಿವೇಶನಕ್ಕೆ ಅಕ್ರಮವಾಗಿ ಪ್ರವೇಶಿಸಿ, ದಾರಿ ವಿಚಾರದಲ್ಲಿ ತಕರಾರು ತೆಗೆದು ಬಾಲು ಕೋಟ್ಯಾನ್ ಹಾಗೂ ಪುಷ್ಪಾವತಿಯವರಿಗೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿತರ ಮೇಲೆ ಭಾ.ದಂ.ಸಂ ಕಲಂ 447, 324, 326, 504 ಮತ್ತು 506 ರಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಬಗ್ಗೆ ಹಿರಿಯಡ್ಕ ಠಾಣೆಯ ತನಿಖಾಧಿಕಾರಿ ಲಕ್ಷ್ಮಣ್ ಪ್ರಭು ಇವರು ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ವಿಚಾರಣೆಯನ್ನು ನಡೆಸಿದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ದೀಪಾ, ಈ ಪ್ರಕರಣದ ಆರೋಪಿತರ ವಿರುದ್ಧದ ಆರೋಪವು ರುಜುವಾತಾಗಿದೆ ಎಂದು ಸದ್ರಿ ಆರೋಪಿತನಿಗೆ 7 ತಿಂಗಳು ಸಜೆ ಕಾರಾಗೃಹ ವಾಸದ ಶಿಕ್ಷೆ ಮತ್ತು 300 ರೂ. ದಂಡ ರೂಪದ ಶಿಕ್ಷೆ ನೀಡಿ ಅಕ್ಟೋಬರ್ 26 ರಂದು ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಕಿರಿಯ ಕಾನೂನು ಅಧಿಕಾರಿ ಮಮ್ತಾಜ್ ವಾದ ಮಂಡಿಸಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.